Friday, 29 January 2016

ಹತ್ತನೆಯ ತರಗತಿ ಅಲಂಕಾರಗಳು


. ಹಸುಳೆಯಂದದಿ ಒಲಿದಳು - ಉಪಮಾಲಂಕಾರ(ಲುಪ್ತೋಪಮಾಲಂಕಾರ)
. ಉಪಮೇಯ : ಸ್ಪಷ್ಟವಾಗಿಲ್ಲ
. ಉಪಮಾನ : ಹಸುಳೆ
. ಉಪಮವಾಚಕ : ಅಂದದಿ
. ಸಮಾನಧರ್ಮ : ಒಲಿಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಶಬರಿಯನ್ನು ಉಪಮಾನವಾದ ಹಸುಳೆಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ದುರ್ಯೋಧನನು ಅರಗಿನ ಮನೆ ಕಟ್ಟಿದಂತೆ - ಉಪಮಾಲಂಕಾರ (ಲುಪ್ತೋಪಮಾಲಂಕಾರ)
. ಉಪಮೇಯ : ಸ್ಪಷ್ಟವಾಗಿಲ್ಲ
. ಉಪಮಾನ : ದುರ್ಯೋಧನ ಅರಗಿನ ಮನೆ
. ಉಪಮವಾಚಕ : ಅಂತೆ
. ಸಮಾನಧರ್ಮ : ಕಟ್ಟುವುದು
ಸಮನ್ವಯ : ಇಲ್ಲಿ ಉಪಮೇಯವಾದ ಅಮೆರಿಕಾ ಕೆನಡಾಗಳಲ್ಲಿ ಮರಗಳಿಂದ ಕಟ್ಟಿದ ಮನೆಯನ್ನು ಉಪಮಾನವಾದ ದುರ್ಯೋಧನನ ಅರಗಿನ ಮನೆಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ಬಳಾರಿಯ ಮನೆಯಂ ಪರಕೆಯ ಕುರಿ ಪುಗಿಸುವಂತೆ - ಉಪಮಾಲಂಕಾರ (ಲುಪ್ತೋಪಮಾಲಂಕಾರ)
. ಉಪಮೇಯ : ಸ್ಪಷ್ಟವಾಗಿಲ್ಲ
. ಉಪಮಾನ : ಬಳಾರಿಯ ಮನೆಗೆ ಕೊಂಡೊಯ್ಯುವ ಹರಕೆಯ ಕುರಿ
. ಉಪಮವಾಚಕ : ಅಂತೆ
. ಸಮಾನಧರ್ಮ : ಪುಗಿಸುವುದು
ಸಮನ್ವಯ : ಇಲ್ಲಿ ಉಪಮೇಯವಾದ ದುಷ್ಟಬುದ್ಧಿಯ ತಂದೆಯನ್ನು ಉಪಮಾನವಾದ ಹರಕೆಯ ಕುರಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.
. ಪುಣ್ಯದೊಂದು ಪೆರ್ಮರನುಳಿವಂತೆ ನೀನುಳಿದೆ. - ಉಪಮಾಲಂಕಾರ (ಲುಪ್ತೋಪಮಾಲಂಕಾರ)
. ಉಪಮೇಯ : ಸ್ಪಷ್ಟವಾಗಿಲ್ಲ
. ಉಪಮಾನ : ಪೆರ್ಮರ
. ಉಪಮವಾಚಕ : ಅಂತೆ
. ಸಮಾನಧರ್ಮ : ಉಳಿಯುವುದು.
ಸಮನ್ವಯ : ಇಲ್ಲಿ ಉಪಮೇಯವಾದ ದುರ್ಯೋಧನನನ್ನು ಉಪಮಾನವಾದ ಪೆರ್ಮರಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ಒಳಗಿನ ಮಂದಿ ಗುಂಡು ಹೊಡೆದರೊ ಮುಂಗಾರಿ ಸಿಡಿಲ ಸಿಡಿದ್ಹಂಗ - ಉಪಮಾಲಂಕಾರ
. ಉಪಮೇಯ : ಒಳಗಿನ ಮಂದಿ ಗುಂಡು ಹೊಡೆಯುವುದು
. ಉಪಮಾನ : ಮುಂಗಾರಿನಲ್ಲಿ ಸಿಡಿಲು ಸಿಡಿಯುವುದು.
. ಉಪಮವಾಚಕ : ಹಾಂಗ
. ಸಮಾನಧರ್ಮ : ಹೊಡೆಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು ಹೊಡೆಯುವುದನ್ನು ಉಪಮಾನವಾದ ಮುಂಗಾರಿನಲ್ಲಿ ಸಿಡಿಯುವ ಸಿಡಿಲಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ - ಉಪಮಾಲಂಕಾರ
. ಉಪಮೇಯ :ಸತಿಪತಿಗಳೊಂದಾಗದವನ ಭಕ್ತಿ
. ಉಪಮಾನ : ಅಮೃತದಲ್ಲಿ ಬೆರೆತ ವಿಷ
. ಉಪಮವಾಚಕ : ಅಂತೆ
. ಸಮಾನಧರ್ಮ :ಬೆರೆಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಸತಿಪತಿಗಳೊಂದಾಗದವನ ಭಕ್ತಿಯನ್ನು ಉಪಮಾನವಾದ ಅಮೃತದಲ್ಲಿ ಬೆರೆತ ವಿಷಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ಮರನೇರಿದ ಮರ್ಕಟನಂತೆ - ಉಪಮಾಲಂಕಾರ(ಲುಪ್ತೋಪಮಾಲಂಕಾರ)
. ಉಪಮೇಯ : ಸ್ಪಷ್ಟವಾಗಿಲ್ಲ
. ಉಪಮಾನ : ಮರನೇರಿದ ಮರ್ಕಟ
. ಉಪಮವಾಚಕ : ಅಂತೆ
. ಸಮಾನಧರ್ಮ : ಸ್ಪಷ್ಟವಾಗಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ಮಾನವನ ಚಂಚಲವಾದ ಮನಸ್ಸನ್ನು ಉಪಮಾನವಾದ ಮರವನೇರಿದ ಮರ್ಕಟಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ಅಂದಣವನೇರಿದ ಸೊಣಗನಂತೆ - ಉಪಮಾಲಂಕಾರ (ಲುಪ್ತೋಪಮಾಲಂಕಾರ)
. ಉಪಮೇಯ : ಮಾನವನ ಚಂಚಲವಾದ ಸ್ವಭಾವ
. ಉಪಮಾನ : ಅಂದಣವನೇರಿದ ಸೊಣಗ
. ಉಪಮವಾಚಕ : ಅಂತೆ
. ಸಮಾನಧರ್ಮ :ಸ್ಪಷ್ಟವಾಗಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ಮಾನವನ ಚಂಚಲವಾದ ಸ್ವಭಾವವನ್ನು ಉಪಮಾನವಾದ ಅಂದಣವನೇರಿದ ನಾಯಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

. ನುಡಿದರೆ ಮುತ್ತಿನ ಹಾರದಂತಿರಬೇಕು - ಉಪಮಾಲಂಕಾರ (ಲುಪ್ತೋಪಮಾಲಂಕಾರ)
. ಉಪಮೇಯ : ನುಡಿ
. ಉಪಮಾನ : ಮುತ್ತಿನ ಹಾರ
. ಉಪಮವಾಚಕ : ಅಂತೆ
. ಸಮಾನಧರ್ಮ : ಸ್ಪಷ್ಟವಾಗಿಲ್ಲ
ಸಮನ್ವಯ: ಇಲ್ಲಿ ಉಪಮೇಯವಾದ ನುಡಿಯನ್ನು ಉಪಮಾನವಾದ ಮುತ್ತಿನ ಹಾರಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

೧೦. ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು (ಲುಪ್ತೋಪಮಾಲಂಕಾರ)
. ಉಪಮೇಯ : ನುಡಿ
. ಉಪಮಾನ : ಮಾಣಿಕ್ಯದ ದೀಪ್ತಿ
. ಉಪಮವಾಚಕ : ಅಂತೆ
. ಸಮಾನಧರ್ಮ : ಸ್ಪಷ್ಟವಾಗಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ನುಡಿಯನ್ನು ಉಪಮಾನವಾದ ಮಾಣಿಕ್ಯದ ದೀಪ್ತಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

೧೧. ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು - ಉಪಮಾಲಂಕಾರ (ಲುಪ್ತೋಪಮಾಲಂಕಾರ)
. ಉಪಮೇಯ : ನುಡಿ
. ಉಪಮಾನ : ಸ್ಪಟಿಕದ ಶಲಾಕೆ
. ಉಪಮವಾಚಕ : ಅಂತೆ
. ಸಮಾನಧರ್ಮ : ಸ್ಪಷ್ಟವಾಗಿಲ್ಲ ಸಮನ್ವಯ : ಇಲ್ಲಿ ಉಪಮೇಯವಾದ ನುಡಿಯನ್ನು ಉಪಮಾನವಾದ ಸ್ಪಟಿಕದ ಶಲಾಕೆಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

೧೨. ಶೋಕದುಲ್ಕೆ .- ರೂಪಕಾಲಂಕಾರ
. ಉಪಮೇಯ : ಶೋಕ
. ಉಪಮಾನ : ಉಲ್ಕೆ
ಸಮನ್ವಯ : ಇಲ್ಲಿ ಉಪಮೇಯವಾದ ಶ್ರೀರಾಮನ ಶೋಕವನ್ನು ಉಪಮಾನವಾದ ಉಲ್ಕೆಗೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.

೧೩. ಆತ್ಮ ಸುರಭಿ .- ರೂಪಕಾಲಂಕಾರ
. ಉಪಮೇಯ : ಆತ್ಮ
. ಉಪಮಾನ : ಸುರಭಿ
ಸಮನ್ವಯ : ಇಲ್ಲಿ ಉಪಮೇಯವಾದ ಆತ್ಮವನ್ನು ಉಪಮಾನವಾದ ಸುರಭಿಗೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.

೧೪. ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾವ. - ಉಪಮಾಲಂಕಾರ
. ಉಪಮೇಯ :ಗುಂಡು ಸುರಿಯುವುದು
. ಉಪಮಾನ : ಸಿಡಿಲು ಸಿಡಿಯುವುದು
. ಉಪಮವಾಚಕ : ಹಾಂಗ
. ಸಮಾನಧರ್ಮ : ಸುರಿಯುವುದು/ಸಿಡಿಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

೧೫. ಮಾರಿಗೌತಣವಾಯ್ತು ನಾಳಿನ ಭಾರತವು. - ರೂಪಕಾಲಂಕಾರ
. ಉಪಮೇಯ : ನಾಳಿನ ಭಾರತ ಯುದ್ಧ
. ಉಪಮಾನ : ಮಾರಿಯ ಔತಣ
ಸಮನ್ವಯ : ಇಲ್ಲಿ ಉಪಮೇಯವಾದ ನಾಳಿನ ಭಾರತ ಯುದ್ಧವನ್ನು ಉಪಮಾನವಾದ ಮಾರಿಯ ಔತಣಕ್ಕೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.

೧೬. ಕಾದಾಟದಾಟ. - ರೂಪಕಾಲಂಕಾರ
. ಉಪಮೇಯ : ಕಾದಾಟ
. ಉಪಮಾನ : ಆಟ
ಸಮನ್ವಯ : ಇಲ್ಲಿ ಉಪಮೇಯವಾದ ಕಾದಾಟವನ್ನು ಉಪಮಾನವಾದ ಆಟಕ್ಕೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.

೧೭. ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಹುಲಿ. - ಉಪಮಾಲಂಕಾರ
. ಉಪಮೇಯ : ಹುಲಿ
. ಉಪಮಾನ : ಬೆಕ್ಕು
. ಉಪಮವಾಚಕ :ಅಂತೆ
. ಸಮಾನಧರ್ಮ : ಹುದುಗಿಸಿಕೊಳ್ಳು
ಸಮನ್ವಯ : ಇಲ್ಲಿ ಉಪಮೇಯವಾದ ಹುಲಿಯ ದೇಹವನ್ನು ಉಪಮಾನವಾದ ಬೆಕ್ಕಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.

೧೮.ವದನಾರವಿಂದ . - ರೂಪಕಾಲಂಕಾರ
. ಉಪಮೇಯ : ವದನ
. ಉಪಮಾನ : ಅರವಿಂದ
ಸಮನ್ವಯ : ಇಲ್ಲಿ ಉಪಮೇಯವಾದ ಶಾನುಭೋಗರ ವದನ(ಮುಖ)ವನ್ನು ಉಪಮಾನವಾದ ಅರವಿಂದ(ಕಮಲ)ಕ್ಕೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.

೧೯. ಮಾತು ಬಲ್ಲವನಿಗೆ ಜಗಳವಿಲ್ಲ ; ಊಟ ಬಲ್ಲವನಿಗೆ ರೋಗವಿಲ್ಲ.-ದೃಷ್ಟಾಂತಾಲಂಕಾರ
. ಉಪಮೇಯ : ಮಾತು ಬಲ್ಲವನಿಗೆ ಜಗಳವಿಲ್ಲ
. ಉಪಮಾನ : ಊಟ ಬಲ್ಲವನಿಗೆ ರೋಗವಿಲ್ಲ.
ಸಮನ್ವಯ : ಇಲ್ಲಿ ಉಪಮೇಯವಾದ ಮಾತು ಬಲ್ಲವನಿಗೆ ಜಗಳವಿಲ್ಲ ಹಾಗೂ ಉಪಮಾನವಾದ ಊಟ ಬಲ್ಲವನಿಗೆ ರೋಗವಿಲ್ಲ ಎರಡೂ ಬಿಂಬ- ಪ್ರತಿಬಿಂಬದಂತೆ ಇರುವುದರಿಂದ ಇಬ್ಬರೂ ಒಂದೇ ಎಂಬುದು ಪ್ರತಿಪಾದಿತವಾಗಿದೆ.ಆದ್ದರಿಂದ ಇದು ದೃಷ್ಟಾಂತಾಲಂಕಾರವಾಗಿದೆ
ಲಕ್ಷಣ : ಎರೆಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ- ಪ್ರತಿಬಿಂಬ ಭಾವವು ತೋರಿಬಂದರೆ ಅದನ್ನು ದೃಷ್ಟಾಂತಾಲಂಕಾರ ಎನ್ನುವರು.
೨೦. ಅಚ್ಛೋದ ಸರೋವರವು ತ್ರೈಲೋಕ್ಯ ಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು. - ಉತ್ಪ್ರೇಕ್ಷಾಲಂಕಾರ
. ಉಪಮೇಯ : ಅಚ್ಛೋದ ಸರೋವರ
. ಉಪಮಾನ : ರನ್ನಗನ್ನಡಿ
ಸಮನ್ವಯ : ಇಲ್ಲಿ ಉಪಮೇಯವಾದ ಅಚ್ಛೋದ ಸರೋವರವನ್ನು ಉಪಮಾನವಾದ ರನ್ನಗನ್ನಡಿ ಎಂಬುದಾಗಿ ಕಲ್ಪಿಸಿರುವುದರಿಂದ ಇದು ಉತ್ಪ್ರೇಕ್ಷಾಲಂಕಾರ ವಾಗಿದೆ.
ಲಕ್ಷಣ : ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ಪ್ರೇಕ್ಷಾಲಂಕಾರ.

೨೧. ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ. - ಉಪಮಾಲಂಕಾರ
. ಉಪಮೇಯ : ನೀಚರಿಗೆ ಮಾಡಿದ ಉಪಕಾರ
. ಉಪಮಾನ : ಹಾವಿಗೆ ಎರೆದ ಹಾಲು
. ಉಪಮವಾಚಕ : ಅಂತೆ
. ಸಮಾನಧರ್ಮ : ಸ್ಪಷ್ಟವಾಗಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ನೀಚರಿಗೆ ಮಾಡಿದ ಉಪಕಾರವನ್ನು ಉಪಮಾನವಾದ ಹಾವಿಗೆ ಎರೆದ ಹಾಲಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.
೨೨. ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು. - ಉಪಮಾಲಂಕಾರ
. ಉಪಮೇಯ : ಭೀಮ ದುರ್ಯೋಧನರು
. ಉಪಮಾನ : ಮದಗಜಗಳು
. ಉಪಮವಾಚಕ : ಅಂತೆ
. ಸಮಾನಧರ್ಮ : ಹೋರಾಡು
ಸಮನ್ವಯ : ಇಲ್ಲಿ ಉಪಮೇಯವಾದ ಭೀಮ ದುರ್ಯೋಧನರನ್ನು ಉಪಮಾನವಾದ ಮದಗಜಗಳಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಲಕ್ಷಣ : ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ.
೨೩.ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ. - ರೂಪಕಾಲಂಕಾರ
. ಉಪಮೇಯ : ಒಡಲಬೇಗೆ
. ಉಪಮಾನ : ಬೆಂಕಿಯುರಿ
ಸಮನ್ವಯ : ಇಲ್ಲಿ ಉಪಮೇಯವಾದ ಅಯೋಧ್ಯೆಯ ಪ್ರಜೆಗಳ ಒಡಲಬೇಗೆಯನ್ನು ಉಪಮಾನವಾದ ಬೆಂಕಿಯುರಿಗೆ ಅಭೇದವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಲಕ್ಷಣ : ಉಪಮೇಯ ಮತ್ತು ಉಪಮಾನಗಳಿಗೆ ಭೇದವು ಕಂಡುಬರದೆ ಅವೆರೆಡೂ ಒಂದೇ ಎಂದು ವರ್ಣಿಸಿದರೆ ಅದೇ ರೂಪಕಾಲಂಕಾರ.

Saturday, 2 January 2016

ಹತ್ತನೆಯ ತರಗತಿ ಒಗಟುಗಳು


ಜನಪದ ಒಗಟುಗಳು
. “ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ
ಮೈಯೊಳಗೆ ನವಗಾಯ ಒಂಬತ್ತು ತುಂಡ
ಒಯನೊಯ್ಯನೇ ಬಂದು ಹೆಗಲೇರಿಕೊಂಡ
ರಾಯರಾಯರಿಗೆಲ್ಲ ತಾನೇ ಪ್ರಚಂಡ ಉತ್ತರ: ಅಂಗಿ
ಮೊದಲನೆಯ ಒಗಟಿನ ಉತ್ತರ ಅಂಗಿ. ಅಂಗಿಯ ತೋಳುಗಳ ಭಾಗವನ್ನು ಕೈ ಎಂದಿದ್ದಾರೆ.ಅಂಗಿಯನ್ನು ಕಾಲಿನ ಭಾಗಕ್ಕೆ ಹಾಗೂ ತಲೆಯ ಭಾಗಕ್ಕೆ ತೊಡುವುದಿಲ್ಲವಾದ್ದರಿಂದ "ಕಾಲಿಲ್ಲ" ಶಿರಹರಿದ" ಪದವನ್ನು ಬಳಸಿದ್ದಾರೆ.ಬಟ್ಟೆಯ ಬೇರೆ ಬೇರೆ ಭಾಗ ಸೇರಿಸಿ ಹೊಲಿಗೆ ಹಾಕುವದನ್ನೇ 'ನವ ಗಾಯ ' ಎಂದಿದ್ದಾರೆ, .ಹಾಗೆಯೇ ರಾಜಮಹಾರಾಜರಿಗೆಲ್ಲರಿಗೂ ಉಡುಗೆಯಾಗಿರುವ ಅಂಗಿ ಪ್ರಚಂಡವಾಗಿದೆ.

. “ಅಂಗೈ ಕೊಟ್ಟರೆ ಮುಂಗೈಯ ನುಂಗುವುದು
ಸಿಂಗಳುಕನಲ್ಲ ಶಿವಬಲ್ಲ ಬೆಡಗೀನ
ಜಾಣೆ ಕನ್ನಡವ ತಿಳಿದ್ಹೇಳೆ" ಉತ್ತರ: ಕುಪ್ಪಸ
ಕುಪ್ಪಸವು ಅಂಗೈಯನ್ನು ತೂರಿಸಿಕೊಂಡು ಮುಂಗೈ ಮೂಲಕ ಶರೀರದಲ್ಲಿ ಕೂರುತ್ತದೆ. ಆದ್ದರಿಂದ ಇದು ಸಿಂಗಳೀಕನಾಗದೆ ಕುಪ್ಪಸವಾಗಿದೆ.

. “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು
ನೀರು ತಾಕಿದರೆ ಮಟಮಾಯ ಕನ್ನಡದ
ಬೆಡಗೀನ ಜಾಣೆ ತಿಳಿದ್ಹೇಳೆ" ಉತ್ತರ: ಉಪ್ಪು
ಉಪ್ಪನ್ನು ನೀರಿನಿಂದಲೇ ತಯಾರಿಸುತ್ತಾರೆ.ನೀರಿನಲ್ಲಿ ಹುಟ್ಟಿದ ಉಪ್ಪು,ನೀರಲ್ಲಿ ಕರಗಿ ಹೋಗುತ್ತದೆ.ಆದ್ದರಿಂದ ಈ ಒಗಟಿನ ಉತ್ತರ ಉಪ್ಪು.

. “ಹಿತ್ಲಲ್ಲಿ ಹುಟ್ಟೋದು ಹೊತ್ತು ನೀರ ಹುಯ್ಯೋದು
ಅದು ಒಂದು ಗಿಡದ ಪರಿಕಾರ – ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ " ಉತ್ತರ : ಹಿತ್ಲವರೆ
ಅವರೆಯನ್ನು ಹಿತ್ತಲಿನಲ್ಲಿ ಬೆಳೆಸುತ್ತಾರೆ.ಹೊತ್ತು ಹೊತ್ತಿಗೆ ಇದಕ್ಕೆ ನೀರು ಹಾಕಿ ಬೆಳೆಸುತ್ತಿದ್ದರು.ಆದ್ದರಿಂದ ಈ ಒಗಟಿನ ಉತ್ತರ ಹಿತ್ಲವರೆ.(ಇಲ್ಲಿ ಹೊತ್ತು ನೇರ ಹುಯ್ಯೋದು ಎಂಬುದನ್ನು ನೀರನ್ನು ಹೊತ್ಕೊಂಡು ಹಾಕುತ್ತಾರೆ ಎಂದೂ ಅರ್ಥೈಸಬಹುದು)ಪರಿಕಾರ= ಪ್ರಕಾರ

. “ ಕೆಸರಲ್ಲಿ ಹುಟ್ಟೋದು ಕೆಸರಲ್ಲಿ ಬೆಳೆಯೋದು
ಅದು ಒಂದು ಗಿಡದ ಪರಿಕಾರ - ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ತಾವರೆ ಬೇರು
ತಾವರೆಯು ಕೆಸರಿನಲ್ಲಿ ಹುಟ್ಟಿ ,ಕೆಸರಿನಲ್ಲಿ ಬೆಳೆಯುತ್ತದೆ. ಆದ್ದರಿಂದ ಈ ಒಗಟಿನ ಉತ್ತರ ತಾವರೆ ಬೇರು.

. “ಬದಿಯಲ್ಲಿ ಹುಟ್ಟೋದು ಬದಿಯಲ್ಲಿ ಬೆಳೆಯೋದು
ಹೋಗೋರ ಮುಂಜೆರಗ ಹಿಡಿಯೋದು -ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಉತ್ತರಾಣಿ ಗಿಡ
ಉತ್ತರಾಣಿ ಗಿಡವು ದಾರಿಯ ಬದಿಯಲ್ಲಿ ಹುಟ್ಟುತ್ತದೆ.ಹಾದಿ ಬದಿಯಲ್ಲಿ ಹುಟ್ಟುವ ಇದು ನಡೆದಾಡುವ ಹೆಂಗಸರ ಸೆರಗನ್ನು ಹಿಡಿಯುತ್ತದೆ.ಆದ್ದರಿಂದ ಈ ಒಗಟಿಗೆ ಉತ್ತರ ಉತ್ತರಾಣಿ ಗಿಡ.

. “ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು
ಉಳುವಾನ ಕಂಡು ನಗುವುದು - ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಗರಿಕೆ ಹುಲ್ಲು
ಹೊಲದ ಬದುಗಳಲ್ಲಿ ಹುಟ್ಟಿ ಬೆಳೆಯುವ ಗರಿಕೆ ಹುಲ್ಲು ರೈತರಿಗೆ ಹಲವು ಬಗೆಗಳಲ್ಲಿ ಉಪಯುಕ್ತವಾದುದು. ಅದ್ದರಿಂದ ಈ ಒಗಟಿನ ಉತ್ತರ ಗರಿಕೆ ಹುಲ್ಲು.

. “ಕಲ್ಲಲ್ ಕುಕ್ಕೂದಲ್ಲ ನೀರಲ್ ಸೆಳೆವುದಲ್ಲ
ಎಲ್ಲೆಲ್ಲೂ ಕಂಡ್ರೂ ಮಡಿವಸ್ತ್ರ - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಕೊಕ್ನ್ಹಕ್ಕಿ (ಕೊಕ್ಕನ್ ಹಕ್ಕಿ)
ಈ ಒಗಟಿನಲ್ಲಿ ಬಟ್ಟೆ ಒಗೆಯುವ ಪ್ರಕ್ರಿಯೆಯನ್ನು ಹೇಳುತ್ತಿದ್ದಾರೆ .ಬಟ್ಟೆಯನ್ನು ಶುಭ್ರಗೊಳಿಸಲು ನಾವು ಕಲ್ಲಿನಲ್ಲಿ ಕುಕ್ಕುತ್ತೇವೆ. ಅನಂತರ ನೀರಿನಲ್ಲಿ ಸೆಳೆಯುತ್ತೇವೆ. ಆದರೆ ಕೊಕ್ಕರೆ ಕಲ್ಲಲ್ಲಿ ಕುಕ್ಕದೆ,ನೀರಿನಲ್ಲಿ ಸೆಳೆಯದೆ ಮಡಿವಸ್ತ್ರದಂತೆ ಶುಭ್ರವಾಗಿ ಕಾಣುತ್ತದೆ.ಕೊಕ್ಕರೆಯು ಹಿಂಡು ಹಿಂಡಾಗಿಯೇ ಇರುವುದರಿಂದ 'ಎಲ್ಲೆಲ್ಲೂ ಕಂಡ್ರೂ' ಪದವನ್ನು ಬಳಸಿದ್ದಾರೆ.
ಕರಾವಳಿಯ ಕುಂದಾಪುರ ಭಾಗಗಳಲ್ಲಿ ಕೊಕ್ಕರೆಗೆ ಕೊಕ್ಹ್ನಕ್ಕಿ (ಕೊಕ್ಕನ್ ಹಕ್ಕಿ)ಎಂದೇ ಕರೆಯುತ್ತಾರೆ.

. “ತಂದೀ ಮದಿಗ್ಹೋಪ್ದಲ್ಲ ತಾಯ್ಮನಿಗೆ ಹೋಪ್ದಲ್ಲ
ಮುಂದದು ಧಾರಿ ಮೂರುತಕ - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಸಂಪಿಗೆ ಹೂವು
ಸಂಪಿಗೆ ಎಂದರೆ ಇಲ್ಲಿ "ನಾಗ ಸಂಪಿಗೆ "ಎಂದು ಅರ್ಥೈಸಿಕೊಳ್ಳಬೇಕು. ಈ ನಾಗ ಸಂಪಿಗೆಯನ್ನು ಶುಭಕಾರ್ಯಗಳಿಗೆ ಬಳಸುವುದಿಲ್ಲ. ಏಕೆಂದರೆ ಈ ಹೂವಿನ ಮಧ್ಯದಲ್ಲಿ ಹಾವಿನ ಹೆಡೆಯ ಆಕಾರದ ಎಸಳು ಇರುತ್ತದೆ. ಆದ್ದರಿಂದ ಇದನ್ನು ತಂದೆ, ಮದುವೆಗೆ ಒಯ್ಯುವದಿಲ್ಲ &ತಾಯಿ ಮನೆಗೆ ಒಯ್ಯುವದಿಲ್ಲ ಅಥವಾ ತಾಯಿ ಮನೆಗೆ ಆ ಹೂವನ್ನು ತೆಗೆದುಕೊಂಡು ಬರಲು ಒಪ್ಪುವುದಿಲ್ಲ .ಮುಂದದು ಧಾರಿ ಮೂರುತಕ ಅಂದರೆ ಮೋಕ್ಷವನ್ನು ಪಡೆಯುವ ಶುಭ ಮಾರ್ಗಎಂದು ಅರ್ಥ. ಈ ಹೂವನ್ನು ಮೋಕ್ಷ ಮಾರ್ಗದಾತನಾದ ಶಿವನ ಪೂಜೆಗೆ ಮಾತ್ರ ಬಳಸುವರು .(ಕೃಪೆ: ಕನ್ನಡ ಎಸ್.ಟಿ.ಎಫ್)

೧೦. “ದರಿಯ ಮ್ಯಾಲ್ ಹುಟ್ಟುವುದು ದೊರಿಯಾಗಿ ಬೆಳೆವುದು
ಅರಮನೆಗುತ್ತರವ ಕೊಡುವುದು - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಹನಿಮರ (ತಾಳೆ ಮರ)
ತಾಳೆ ಮರವು ಸಾಮಾನ್ಯವಾಗಿ ಬೇಲಿ ಮೇಲೆ ಹುಟ್ಟುತ್ತದೆ .ನೇರವಾಗಿ(ತಲೆಎತ್ತಿ)ಎತ್ತರವಾಗಿ ಬೆಳೆಯುವುದರಿಂದ ದೊರೆಯಂತೆ ಬೆಳೆಯುವುದು ಎಂದಿದ್ದಾರೆ.ತಾಳೆ ಮರದ ಗರಿಯನ್ನು ಅರಮನೆಗಳಲ್ಲಿ ಪತ್ರವ್ಯವಹಾರಕ್ಕೆ ಬಳಸುತ್ತಾರೆ(ತಾಳೆಗರಿ).ಈ ಒಗಟಿನಲ್ಲಿ ದರಿ ಎಂದರೆ ಮಣ್ಣಿನಿಂದ ನಿರ್ಮಿಸಿದ ಬೇಲಿ(ಕಾಪೌಂಡ್ ರೀತಿಯ ರಚನೆ) ಎಂದು ಅರ್ಥ.ಕುಂದಾಪುರ ಕನ್ನಡದಲ್ಲಿ ಬೇಲಿಗೆ ದರೆ ಎಂದು ಕರೆಯುವುದು ರೂಢಿ. (ಉಚ್ಛಾರಣೆ-ಧರೆ>ದರೆ>ದರಿ)

೧೧. ಹಸಿಹಸಿಯ ಬೀಳೆ ಮಸಿಯ ಬಣ್ಣದ ಬೀಳೆ
ಬಿಸಿನೀರ ಹಾಕಿ ಸಲಗುವಿ - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ತಲೆಕೂದಲು
ತಲೆಕೂದಲು ಹಸಿಹಸಿಯಾಗಿರುವ(ಜೀವಂತವಾಗಿರುವ, ಕೂದಲು ಬೆಳೆಯುತ್ತಿರುವುದರಿಂದ) ಕಪ್ಪು(ಮಸಿ)ಬಣ್ಣದ ಬಳ್ಳಿಯಂತಿರುತ್ತದೆ.ತಲೆಕೂದಲನ್ನು ಬಿಸಿನೀರು ಹಾಕಿ ಸಲಹುತ್ತೇವೆ.(ಪೋಷಿಸುತ್ತೇವೆ) ಆದ್ದರಿಂದ ಈ ಒಗಟಿನ ಉತ್ತರ ತಲೆಕೂದಲು (ಬೀಳು=ಬಳ್ಳಿ ,ಲತೆ )

೧೨. “ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು
ನಂಗ್ಹೇಳಿ ಅರ್ತು ಈ ಹಾಡಿನ - ಹೇಳ್ದಿರೆ
ಕೈಗೆ ಹಲ್ ಮುರ್ದು ಕೊಡುವೆನು ಉತ್ತರ : ಬೀಸುಕಲ್ಲು
ಬೀಸುಕಲ್ಲಿನಲ್ಲಿ ಕಾಳುಗಳನ್ನು ನೆತ್ತಿಯ ಮೇಲೆ ಹಾಕಿ ಬೀಸಿದಾಗ ಅದು ಮಗ್ಗುಲಲ್ಲಿ ಬೀಳುತ್ತದೆ ಆದ್ದರಿಂದ ಈ ಒಗಟಿನ ಉತ್ತರ ಬೀಸುಕಲ್ಲು.